ಇದಕ್ಕೆ ಏನೇನು ಮಾಡಬೇಕಿದೆಯೋ ಅದನ್ನು ಮಾಡುತ್ತೇವೆ’ ಎಂದು ಹೇಳಿದ ಕೊಹ್ಲಿ ‘ಎದುರಾಳಿಗಳ ಬಲ ಮತ್ತು ದೌರ್ಬಲ್ಯದ ಅರಿವಿದ್ದುಕೊಂಡೇ ಈ ಮಾತು ಆಡುತ್ತಿದ್ದೇನೆ’ ಎಂದರು. ಮೊದಲ ಸೆಮಿಫೈನಲ್ನಲ್ಲಿ ಪಾಕಿಸ್ತಾನ ಆತಿಥೇಯ ಇಂಗ್ಲೆಂಡ್ ವಿರುದ್ಧ ಜಯ ಗಳಿಸಿತ್ತು. ಗುರುವಾರ ನಡೆದ ಎರಡನೇ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು ಭಾರತ ಒಂಬತ್ತು ವಿಕೆಟ್ಗಳಿಂದ ಮಣಿಸಿತ್ತು. ಈ ವಿಷಯದ ಬಗ್ಗೆ ಕೇಳಿದಾಗ ‘ಹಿಂದಿನ ಫಲಿತಾಂಶದ ಕನವರಿಕೆಯಲ್ಲಿದ್ದು ಕೊಂಡು ಆಡಿದರೆ ಫಲ ಏನಾಗುತ್ತದೆ ಎಂದು ಹೇಳುವುದು ಕಷ್ಟ’ ಎಂದರು.