ನೂತನ ದಂಪತಿಗಳಿಗೆ ಗಿಡಗಳನ್ನು ನೀಡಲಾಯಿತು. ಗಡಿಯಾರ, ಗೃಹೋಪಯೋಗಿ ವಸ್ತುಗಳನ್ನು ಕಾಣಿಕೆಯಾಗಿ ನೀಡಲಾಯಿತು.
ಬಳಿಕ ಮಾತನಾಡಿದ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ‘ಯಶಸ್ವಿ ಸನ್ಯಾಸಿಗಿಂತ ಯಶಸ್ವಿ ಸಂಸಾರಿಯೇ ಲೇಸು. ನವ ದಂಪತಿಗಳು ಸಂತೋಷದಿಂದ ಜೀವನ ನಡೆಸಬೇಕು. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು.