ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಜೋಡಣೆ: ರಜನಿ ಬೆಂಬಲ

Last Updated 18 ಜೂನ್ 2017, 20:16 IST
ಅಕ್ಷರ ಗಾತ್ರ

ಚೆನ್ನೈ: ಪಿ. ಅಯ್ಯಕನ್ನು ನೇತೃತ್ವದ 16 ರೈತರ ನಿಯೋಗವನ್ನು ಭಾನುವಾರ ಭೇಟಿ ಮಾಡಿದ ನಟ ರಜನಿಕಾಂತ್, ನದಿಗಳ ಜೋಡಣೆ ಮಾಡಬೇಕೆಂಬ ಅವರ ಮನವಿಯನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ.

‘ನದಿ ಜೋಡಣೆ ಸಂಬಂಧ ಆಸಕ್ತಿ ತೋರಿರುವ ರಜನಿಕಾಂತ್ ಅವರು, ಆರಂಭದಲ್ಲಿ ಮಹಾನದಿ, ಗೋದಾವರಿ, ಕೃಷ್ಣಾ, ಪಾಲಾರು ಮತ್ತು ಕಾವೇರಿ ನದಿಗಳ ಜೋಡಣೆ ಆಗಬೇಕು ಎಂದಿದ್ದಾರೆ’ ಎಂದು ನಟನ ಜೊತೆ ಭಾನುವಾರ ನಡೆದ ಭೇಟಿಯ ನಂತರ, ರಾಷ್ಟ್ರೀಯ ದಕ್ಷಿಣ ಭಾರತ ನದಿ ಜೋಡಣಾ ರೈತರ ಸಂಘದ ಅಧ್ಯಕ್ಷ ಅಯ್ಯಕನ್ನು ಹೇಳಿದ್ದಾರೆ.

ಕಳೆದ ವಾರವಷ್ಟೇ ತಮ್ಮ ಅಭಿಮಾನಿಗಳಿಗೆ, ‘ಯುದ್ಧಕ್ಕೆ ಸಿದ್ಧರಾಗಿ’ ಎಂದು ಕರೆ ನೀಡಿದ್ದ ನಟ, ಈಗ ರೈತರ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ₹ 1 ಕೋಟಿ ಮೀಸಲಿಟ್ಟಿದ್ದಾರೆ.

‘ಅವರು ನೇರವಾಗಿ ಪ್ರಧಾನಿಯವರನ್ನು ಭೇಟಿಯಾಗುವ ಕುರಿತು ಏನೂ ಹೇಳಲಿಲ್ಲ. ಆದರೆ ಅವರು ಕೊಡುತ್ತೇನೆ ಎಂದ ಹಣವನ್ನು ಯೋಜನೆಯ ಜಾರಿಗಾಗಿ ಪ್ರಧಾನಿ ಅವರಿಗೇ ಹಸ್ತಾಂತರಿಸಲು ಕೇಳಿಕೊಂಡಿದ್ದೇವೆ’ ಎಂದು ಅಯ್ಯಕನ್ನು ಹೇಳಿದ್ದಾರೆ.

ಕಾವೇರಿ ನದಿ ವಿಚಾರವಾಗಿ 2002ರಲ್ಲಿ ಉಪವಾಸ ಕೂತಿದ್ದ ರಜನಿಕಾಂತ್ ತಮ್ಮ ಧರಣಿಯ ನಂತರ, ಹಿಮಾಲಯದ ಮತ್ತು ಪರ್ಯಾಯ ದ್ವೀಪಗಳ ನದಿ ಜೋಡಣೆಗಾಗಿ ₹ 1 ಕೋಟಿ ನೀಡುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT