ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಲಾಗಿದ್ದ ಎಳ್ಳು, ಅವರೆ, ನೆಲಕಡಲೆಗಳು ತೇವಾಂಶದ ಕೊರತೆ ಕಾರಣ ಒಣಗುತ್ತಿವೆ. ತೊಗರಿ, ಹಲ ಸಂದೆ, ನೆಲಗಡಲೆ ಬಿತ್ತನೆಯಲ್ಲೂ ತೀವ್ರ ಹಿನ್ನಡೆ ಆಗಿದೆ. ಕಳೆದ ಮೂರು ವರ್ಷಗಳ ಕಾಲ ಜಿಲ್ಲೆಯಲ್ಲಿ ಸತತ ಬರಗಾಲವಿದ್ದು, ಇದು ಈ ಬಾರಿಯೂ ಮರುಕಳಿಸಬಹುದು ಎಂದು ಎಂಬ ಆತಂಕದಲ್ಲಿ ರೈತ ಸಮುದಾಯ ಮಳೆಗಾಗಿ ಕಾಯತೊಡಗಿದೆ.