ಗೋಮಾಂಸ ಸಾಗಾಟ ಮಾಡುತ್ತಿದ್ದಾರೆಂದು ಶಂಕಿಸಿ ಹಜಾರಿಬಾಗ್ ಜಿಲ್ಲೆಯ ಮೌನಾ ಗ್ರಾಮದ ಮುಸ್ಲಿಂ ಸಮುದಾಯದ 40 ವರ್ಷ ವಯಸ್ಸಿನ ಮಾಂಸ ವ್ಯಾಪಾರಿಯೊಬ್ಬರ ಮೇಲೆ ಗುಂಪೊಂದು ಇತ್ತೀಚೆಗೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಜತೆಗೆ, ಅವರ ವಾಹನಕ್ಕೂ ಬೆಂಕಿಹಚ್ಚಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಾಪರಿ ನಂತರ ಮೃತಪಟ್ಟಿದ್ದರು.