ಈ ವಾರವೇ ಬಿಡುಗಡೆಯಾಗಲಿರುವ ‘ಸಂಜೆಯಲ್ಲಿ ಅರಳಿದ ಹೂವು’ ಎಸ್. ಜಿ. ಮಾಲತಿಶೆಟ್ಟಿ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಸಿನಿಮಾ. ಜಯಶ್ರೀ ಅವರ ಜತೆ ನಾರಾಯಣ ಸ್ವಾಮಿ, ಅರ್ಜುನ್ ಯೋಗೇಶ್ವರ್ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ಜನಪ್ರಿಯ ಗಾಯಕ ಆರ್. ಕೆ. ಪದ್ಮನಾಭ ಅವರೂ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.