ಬೆಂಗಳೂರು: ‘ವೈಚಾರಿಕ ನೆಲೆಯಲ್ಲಿ ಬೆಳೆದಿರುವ ನಾಡಿನ ಸಂಸ್ಕೃತಿಯನ್ನು ಕೆಡಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಆ ಕೆಲಸ ಯಶಸ್ವಿಯಾಗುವುದಿಲ್ಲ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ವಿಜಯನಗರದಲ್ಲಿ ಆಯೋಜಿಸಿದ್ದ ‘ಜನಜಾಗೃತಿಗಾಗಿ ಧರ್ಮ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ತಂದೆ–ತಾಯಿ, ಬಂಧು–ಬಳಗ, ಮಿತ್ರರ ಸಂಬಂಧಗಳಿಗಿಂತ ಗುರು–ಶಿಷ್ಯರ ಸಂಬಂಧ ಹಿರಿದು. ಯೋಗ್ಯ ಗುರು ಮತ್ತು ಸಜ್ಜನರ ಸಹವಾಸದಿಂದ ಜೀವನ ಸಾರ್ಥಕ ಆಗುತ್ತದೆ’ ಎಂದರು.
‘ಮನುಷ್ಯ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಜೀವಿತಾವಧಿಯಲ್ಲಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.