ಕರಾವಳಿ ಜನಕೂಟದ ಅಧ್ಯಕ್ಷ ಜಯಸಾಲಿಯಾನ ಮಾತನಾಡಿ, ‘ನಿತ್ಯ ಕೆ.ಆರ್.ಪುರ ಮಾರ್ಗವಾಗಿ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿದ್ದರೆ ಅದಕ್ಕೆ ಪೊಲೀಸರ ಶ್ರಮವೇ ಕಾರಣ. ಮಳೆ, ಬಿಸಿಲು, ದೂಳಿನಿಂದ ಪೊಲೀಸರ ಜೀವಕ್ಕೆ ಆಪತ್ತು ಬರುತ್ತಿದೆ. ಹೀಗಾಗಿ ಸಂಚಾರ ಪೊಲೀಸರಿಗೆ ಮುಖಗವಸುಗಳನ್ನು ವಿತರಿಸುತ್ತಿದ್ದೇವೆ’ ಎಂದು ಹೇಳಿದರು.