ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ನಿತೀಶ್ ಕುಮಾರ್ ಅವರು ಹಲವು ತತ್ವಗಳನ್ನು ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನಿತೀಶ್ ಅವರು, ‘ತತ್ವಗಳನ್ನು ಬದಲಾಯಿಸುತ್ತಿರುವವರು ನಾನಲ್ಲ, ನೀವು (ಕಾಂಗ್ರೆಸ್ನವರು)’ ಎಂದು ಹೇಳಿದ್ದಾರೆ. ಜತೆಗೆ, ಜಿಎಸ್ಟಿ ಉದ್ಘಾಟನಾ ಸಮಾರಂಭಕ್ಕೆ ಸಚಿವರನ್ನು ಕಳುಹಿಸಿಕೊಟ್ಟಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.