ಕೋಚ್ ಹುದ್ದೆಗೆ ರವಿಶಾಸ್ತ್ರಿ ಮಾತ್ರವಲ್ಲದೆ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ವೆಂಕಟೇಶ ಪ್ರಸಾದ್, ರಿಚರ್ಡ್ ಪೈಬಸ್ ದೊಡ್ಡ ಗಣೇಶ, ಲಾಲ್ಚಂದ್ ರಜಪೂತ್ ಮತ್ತು ಫಿಲಿಪ್ ಸಿಮನ್ಸ್ ಅರ್ಜಿ ಸಲ್ಲಿಸಿದ್ದಾರೆ. ಮುಂಬೈನವರಾದ ಗಾವಸ್ಕರ್ ಮತ್ತು ಆಲ್ರೌಂಡರ್ ರವಿಶಾಸ್ತ್ರಿ ಅವರು ಭಾರತ ತಂಡದಲ್ಲಿ ಕೂಡಿ ಆಡಿದ್ದರು. ರವಿಶಾಸ್ತ್ರಿ ಅವರು ತಮ್ಮ ಬಿರುಸಾದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಅವರು ಎಡಗೈ ಸ್ಪಿನ್ನರ್ ಕೂಡ ಆಗಿದ್ದರು.