ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಿರುವ ರೈಲ್ವೆ ಕೆಳಸೇತುವೆ, ಮೇಲ್ಸೇತುವೆ, ರಸ್ತೆ ವಿಸ್ತರಣೆ ಹಾಗೂ ಇನ್ನಿತರ ಪ್ರಮುಖ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ರಕ್ಷಣಾ ಇಲಾಖೆಗೆ ಸೇರಿದ 62 ಎಕರೆ ಬೇಕಾಗಿತ್ತು. ಈ ಜಮೀನು ಬಿಟ್ಟುಕೊಟ್ಟು ಬದಲಿ ಭೂಮಿ ಪಡೆದುಕೊಳ್ಳುವಂತೆ ಪಾಲಿಕೆಯು ರಕ್ಷಣಾ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿತ್ತು.