ರಾಜಧಾನಿ ಶ್ರೀನಗರದ ನೌಹತ್ತಾ ಪ್ರದೇಶದಲ್ಲಿರುವ ಐತಿಹಾಸಿಕ ಜಾಮಿಯಾ ಮಸೀದಿಯ ಮುಂಭಾಗದಲ್ಲಿ, ಕರ್ತವ್ಯ ನಿರತ ಡಿವೈಎಸ್ಪಿ ಮೊಹಮ್ಮದ್ ಅಯೂಬ್ ಪಂಡಿತ್ (57) ಅವರನ್ನು ಉದ್ರಿಕ್ತ ಜನರ ಗುಂಪೊಂದು ಜೂನ್ 23ರಂದು ಹೊಡೆದು ಸಾಯಿಸಿತ್ತು.ಪಂಡಿತ್ ಅವರನ್ನು ಹೊಡೆದು ಸಾಯಿಸುತ್ತಿರುವ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಈ ದೃಶ್ಯಗಳು ತುಂಬಾ ಭಯಾನಕವಾಗಿವೆ. ಈ ವಿಡಿಯೊ ಎಲ್ಲೆಡೆ ಪ್ರಸಾರವಾದರೆ ರಾಜ್ಯದಲ್ಲಿ ಶಾಂತಿಗೆ ಭಂಗವಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತು ಕಾಶ್ಮೀರ ಸರ್ಕಾರ ಈ ವಿಡಿಯೊವನ್ನು ನಾಶಮಾಡಿದೆ ಎಂದು ಅಲ್ಲಿನ ಅಧಿಕೃತರು ತಿಳಿಸಿರುವುದಾಗಿ ಪತ್ರಿಕೆ ವರದಿಯಲ್ಲಿ ಹೇಳಿದೆ.