ಚಂದನವನದಲ್ಲಿ ಈಗ ಹಾರರ್ ಸಿನಿಮಾಗಳ ಅಬ್ಬರ ಜೋರಿದೆ. ಯುವ ನಿರ್ದೇಶಕರು ಹಾರರ್ ಚಿತ್ರಗಳ ಬೆನ್ನುಬಿದ್ದಿದ್ದಾರೆ. ಥ್ರಿಲ್ಲರ್, ಹಾರರ್ ಕಥೆ ಹೊಸೆದು ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದ್ದಾರೆ. ಇಂಥಹ ಚಿತ್ರಗಳ ಸಾಲಿಗೆ ಈಗ ‘ಗಾಯಿತ್ರಿ’ ಚಿತ್ರವೂ ಸೇರಿದೆ. ಸಕಲೇಶಪುರ, ಚೆನ್ನೈ, ಮಂಗಳೂರು, ಚಾರ್ಮುಡಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಪ್ರೇಕ್ಷಕರಿಗೆ ಮುಂದೆ ಬರಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.