ಶಾಸ್ತ್ರೀಯ ಸ್ಥಾನಮಾನ ಏನಾಗಿದೆ?
‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕು ಎಂದು ಸಾಕಷ್ಟು ಹೋರಾಟ ಮಾಡಿ, ಅದನ್ನು ದೊರಕಿಸಿಕೊಂಡಿದ್ದೇವೆ. ಆದರೆ, ಇಲ್ಲಿ ಅದು ಉಸಿರು ಕಳೆದುಕೊಂಡ ಸ್ಥಿತಿಯಲ್ಲಿದೆ. ಅದಕ್ಕೆ ಮೀಸಲಾಗಿರುವ ಹಣ ಖರ್ಚು ಮಾಡಲು ಯಾಕೆ ಮೀನಮೇಷ ಎಣಿಸುತ್ತಿದ್ದಾರೆ. ಅದಕ್ಕೊಂದು ಕೇಂದ್ರ ಸ್ಥಾಪಿಸಲು ಜಗಳ ಆಡುತ್ತಿದ್ದರೆ, ಕೆಲಸ ಮಾಡಲು ಇನ್ನಷ್ಟು ದಿನ ಬೇಕು’ ಎಂದು ಬಿ.ಎಲ್. ಶಂಕರ್ ಪ್ರಶ್ನಿಸಿದರು.