ರಂಗಜಂಗಮ ಕಲಾನಿಕೇತನ ಸಂಸ್ಥೆ ಕಲಾಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಂಸ್ಕೃತಿ ಹಬ್ಬ’ದಲ್ಲಿ ಮಾತನಾಡಿದರು. ‘ಡಾ.ರಾಜ್ ಮತ್ತು ಕುವೆಂಪು ಅವರ ಸರಳತೆ ಮತ್ತು ಆದರ್ಶಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಿದೆ’ ಎಂದು ಹೇಳಿದರು. ನಾಟ್ಯತರಂಗ ಕಲಾತಂಡದ 60ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ ಕೊಂಕಣಿ ಯುಗಳ ಗೀತೆಗಳು ಮತ್ತು ರಘು ದೀಕ್ಷಿತ್ ಅವರ ಗಾಯನಕ್ಕೆ ಸಭಿಕರು ಮನಸೋತು ಹೆಜ್ಜೆಹಾಕಿದರು.