‘ಸ್ವಂತ ಜಾಗೆಯಲ್ಲಿ ಕೊಳವೆ ಬಾವಿ ಕೊರೆಸಿ ವರ್ಷ ಸಮೀಪಿಸುತ್ತಿದೆ. ಅಂದಿನಿಂದಲೂ ಜನತೆಗೆ ನೀರು ಕೊಡುವ ಕಾಯಕ ಆರಂಭಿಸಿದ್ದಾರೆ. ಮಳೆಯ ಕೊರತೆಯಿಂದ ಈಗ ಬರಗಾಲ ಬಿದ್ದಿದೆ. ನೀರಿನ ತೀವ್ರ ಕೊರತೆಯನ್ನು ಈ ಭಾಗದ ಜನರು ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಹಿಂದು, ಮುಂದು ನೋಡದೆ ನಿತ್ಯ ನೀರು ಕೊಡುತ್ತಾರೆ’ ಎಂದು ತಿಪ್ಪವ್ವ ಆರೇರ, ಶಿವಪ್ಪ ಕರೆಪ್ಪನವರ ಸ್ಮರಿಸಿದರು.