ಜೆಮ್ಶ್ಷೆಡ್ಪುರ: ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ಮಹಿಳೆಯರು ತೊಳೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಜೆಮ್ಶ್ಷೆಡ್ಪುರದ ಬ್ರಹ್ಮ ಲೋಕ ಧಾಮದಲ್ಲಿ ನಡೆಯುತ್ತಿರುವ ‘ಗುರು ಮಹೋತ್ಸವ’ ಸಮಾರಂಭದಲ್ಲಿ(ಜೂನ್ 7ರಂದು) ಇಬ್ಬರು ಮಹಿಳೆಯರು ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ತೊಳೆದಿದ್ದಾರೆ. ಈ ವೀಡಿಯೊ ಎಲ್ಲೆಡೆ ಹರಿದಾಡುತ್ತಾ ಸುದ್ದಿ ಮಾಡುತ್ತಿದೆ.