ಬೆಳಿಗ್ಗೆ 10ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ, 12ರ ಸುಮಾರಿಗೆ ಆರಂಭವಾಯಿತು. ಆದರೂ ಬಹುತೇಕ ಕುರ್ಚಿಗಳು ಖಾಲಿ ಇದ್ದವು. ವೇದಿಕೆ ಏರಿ ಸಭಿಕರತ್ತ ನೋಡಿದ ಮುಖ್ಯಮಂತ್ರಿ, ಜನರು ಇಲ್ಲದಿರುವುದನ್ನು ಗಮನಿಸಿದರು. ಪಕ್ಕದಲ್ಲೆ ಇದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಸುಗಾರ ಅವರ ವಿರುದ್ಧ ಹರಿಹಾಯ್ದರು.