ಬೆಂಗಳೂರು: ಗುರುಪೂರ್ಣಿಮೆಯನ್ನು ನಗರದಲ್ಲಿ ಭಾನುವಾರ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಹಿಂದೂ, ಜೈನ, ಬೌದ್ಧ ಮತ್ತು ಸಿಖ್ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಆಚರಣೆಗಳು ನಡೆದವು. ಜನರಿಗೆ ಗುರುರೂಪದಲ್ಲಿ ಮಾರ್ಗದರ್ಶನ ಮಾಡಿದ ಶಿರಡಿ ಸಾಯಿಬಾಬಾ, ರಾಘವೇಂದ್ರಸ್ವಾಮಿ, ಬುದ್ಧ ಹಾಗೂ ಮಹಾವೀರ ಮಂದಿರಗಳಲ್ಲಿ ಅಭಿಷೇಕ, ಹೋಮ–ಹವನ, ಸಾಮೂಹಿಕ ಪ್ರಾರ್ಥನೆ ಹಾಗೂ ಮಹಾಮಂಗಳಾರತಿ ಜರುಗಿದವು.