‘ಈ ನಾಲ್ಕು ತಿಂಗಳು ಜೈನ ಧರ್ಮದವರಿಗೆ ಅತ್ಯಂತ ಪವಿತ್ರವಾದುದು. ಜೈನ ಮುನಿಗಳು ಒಂದೇ ಸ್ಥಳದಲ್ಲಿ ನಾಲ್ಕು ಮಾಸವನ್ನು ಕಳೆದು ಚಾತುರ್ಮಾಸ ಪೂರ್ಣಗೊಳಿಸುತ್ತಾರೆ. ಮುನಿಗಳು ನಿತ್ಯ ಧಾರ್ಮಿಕ ಪ್ರವಚನ ನೀಡುತ್ತಾರೆ’ ಎಂದು ಚಾತುರ್ಮಾಸ ಸಮಿತಿ ಕಾರ್ಯದರ್ಶಿ ಕೆ. ಗುಣಪಾಲ್ ಜೈನ್ ತಿಳಿಸಿದರು.
ಮುಂದಿನ ವರ್ಷ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಲು ಈ
ಎಲ್ಲ ಮುನಿಗಳು ಮಧ್ಯಪ್ರದೇಶದ ಇಂದೋರ್ನಿಂದ 2,000 ಕಿಲೋ ಮೀಟರ್ ಪ್ರಯಾಣವನ್ನು ಕಾಲ್ನಡಿಗೆ
ಯಲ್ಲಿ ಮಾಡಿ, ಸದ್ಯ ನಗರ ತಲುಪಿದ್ದಾರೆ.
ಜೈನ ಭವನದಲ್ಲಿ ಸಂಭ್ರಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 2,000 ಮಂದಿ ಭಾಗವಹಿಸಿದ್ದರು.