ಇಷ್ಟೆಲ್ಲ ಅರ್ಜಿ ಸಲ್ಲಿಸಿದ ಮೇಲೆ ನಿಜಕ್ಕೂ ‘ನಿಮ್ಮ ಕೃಷಿ ಸಾಲ ಮನ್ನಾ ಆಗುತ್ತಾ’ ಎಂದು ರೈತರನ್ನು ಕೇಳಿದರೆ, ‘ನಮ್ಗೇನು ಗೊತ್ತು ಸ್ವಾಮಿ. ಅವರು ಅರ್ಜಿ ಹಾಕಿ ಅಂದರು. ಹಾಕುತ್ತಿದ್ದೇವೆ. ಸೀಲು ಹಾಕಿಸಿ, ಸ್ವೀಕೃತಪತಿ ಪಡೆಯುತ್ತಿದ್ದೇವೆ. ಯಾವುದೇ ಬ್ಯಾಂಕ್ ನವರು ಸಾಲ ವಸೂಲಿಗೆ ಬಂದರೆ, ಜಿಲ್ಲಾಧಿಕಾರಿ ಕಚೇರಿ ಸೀಲ್ ಹಾಕಿ ಕೊಟ್ಟಿರುವ ಸ್ವೀಕೃತಿ ಪತ್ರ ತೋರಿಸುತ್ತೇವೆ’ ಎಂದು ಅಮಾಹಕರಂತೆ ಮಾತನಾಡುತ್ತಾರೆ.