ಅಷ್ಟೇ ಅಲ್ಲದೆ, ದೇಶದ ಅತ್ಯಂತ ಹಿರಿಯ ಅಧಿಕಾರಿಯಾಗಿರುವ ಸಂಪುಟ ಕಾರ್ಯದರ್ಶಿಗೆ ನೀಡಲಾಗುತ್ತಿದ್ದ ಮಾಸಿಕ ₹10,000 ಅತಿಥಿ ಭತ್ಯೆಯನ್ನೂ ನಿಲ್ಲಿಸುವಂತೆ ಹಣಕಾಸು ಕಾರ್ಯದರ್ಶಿ ಅಶೋಕ್ ಲವಾಸಾ ನೇತೃತ್ವದ ಭತ್ಯೆಗಳ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಮಿತಿಯ ಹೆಚ್ಚಿನ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಯಥಾವತ್ತಾಗಿ ಜಾರಿಗೆ ತರಲು ಮುಂದಾಗಿದೆ. ಕೆಲವು ಶಿಫಾರಸುಗಳನ್ನು ಪರಿಷ್ಕರಿಸಿದೆ ಎಂದು
ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.