ಗ್ರಾಮಕ್ಕೆ ಭೇಟಿ ನೀಡಿದ ಉಪ ತಹಶೀಲ್ದಾರ್ ಎನ್.ಜಿ. ದೊಡಮನಿ, ಕಂದಾಯ ನಿರೀಕ್ಷಕ ಮಹಾಂತೇಶ ಅಂಗಡಿ ಅವರು, ಈ ಹಿಂದೆ ಸ್ಮಶಾನಕ್ಕೆ ಜಾಗ ನೀಡಿದ ಲಚ್ಚೆವ್ವ ಅವರನ್ನು ಕರೆಯಿಸಿ, ಮನವೊಲಿಸಲು ಯತ್ನಿಸಿದರು. ಆದರೆ ಅವರು ಸಮ್ಮತಿಸಲಿಲ್ಲ.
ಪರಿಹಾರ ಕಾಣದ ಅಧಿಕಾರಿಗಳು, ಮಲಪ್ರಭಾ ನದಿ ದಂಡೆಯ ಮೇಲೆಯೇ ಅಂತ್ಯಕ್ರಿಯೆ ನಡೆಸುವಂತೆ ಸೂಚಿಸಿ ಮುಂದಿನ ತಿಂಗಳು ಜಾಗ ಗೊತ್ತು ಮಾಡುವುದಾಗಿ ಲಿಖಿತ ಆಶ್ವಾಸನೆ ನೀಡಿದರು.ಆ ಬಳಿಕವಷ್ಟೇ ಪ್ರತಿಭಟನೆಯನ್ನು ಕೈಬಿಟ್ಟ ದಲಿತರು, ಮೃತನ ಅಂತ್ಯಕ್ರಿಯೆ ನೆರವೇರಿಸಿದರು.