ಬೆಂಗಳೂರು: ಬೆಂಗಳೂರು ವಲಯ ತಂಡದವರು ಕೆಎಸ್ಸಿಎ ಆಶ್ರಯದ ಎಸ್.ಎ. ಶ್ರೀನಿವಾಸನ್ ಸ್ಮಾರಕ 23 ವರ್ಷದೊ ಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.
ಆರ್ಎಸ್ಐ ಕ್ರೀಡಾಂಗಣದಲ್ಲಿ ನಡೆದ ಮೊಫ್ಯುಸಲ್ ಇಲೆವನ್ ವಿರುದ್ಧದ ಫೈನಲ್ ಹೋರಾಟ ಡ್ರಾದಲ್ಲಿ ಅಂತ್ಯಕಂಡಿತು. ಹೀಗಾಗಿ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಬೆಂಗಳೂರು ವಲಯ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ್ದ ಬೆಂಗಳೂರು ವಲಯ 63.2 ಓವರ್ಗಳಲ್ಲಿ 282 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಮೊಫ್ಯುಸಲ್ ಇಲೆವನ್ 54 ಓವರ್ಗಳಲ್ಲಿ 200 ರನ್ಗಳಿಗೆ ಹೋರಾಟ ಮುಗಿಸಿತ್ತು.
82ರನ್ಗಳ ಮುನ್ನಡೆ ಪಡೆದು ದ್ವಿತೀಯ ಇನಿಂಗ್ಸ್ ಶುರುಮಾಡಿದ್ದ ಬೆಂಗಳೂರ ವಲಯ 64 ಓವರ್ಗಳಲ್ಲಿ 9 ವಿಕೆಟ್ಗೆ 215ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.