‘ಮಹಿಳೆಯರ ಸರ ಕಳ್ಳತನ, ಒಂಟಿ ಮಹಿಳೆಯರ ಕೊಲೆ ಹಾಗೂ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಪ್ರಕರಣ ತಡೆಗೆ ಪೊಲೀಸ್ ಕಮಿಷನರ್ಗಳಿಗೆ ಸೂಚನೆ ನೀಡಿದ್ದೇನೆ. ಎಡಿಜಿಪಿಗಳಿಗೆ ಜಿಲ್ಲಾವಾರು ಉಸ್ತುವಾರಿ ನೀಡಲಾಗಿದ್ದು, ಕಾಲ ಕಾಲಕ್ಕೆ ಆ ಜಿಲ್ಲೆಗಳಿಗೆ ಹೋಗಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುವಂತೆಯೂ ಹೇಳಿದ್ದೇನೆ’ ಎಂದು ತಿಳಿಸಿದರು.