ಅಮರನಾಥ ಯಾತ್ರಿಗಳ ಮೇಲಿನ ದಾಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ದಾಳಿ ಖಂಡಿಸಿ ರಾಜನಾಥ್ ಅವರಿಗೆ ಟ್ವೀಟ್ ಮಾಡಿದ್ದ ಸುಚಿ ಅವರು, ‘ಈ ಸಂದರ್ಭದಲ್ಲಿ ಕಾಶ್ಮೀರಿಯತ್(ಕಾಶ್ಮೀರದ ಏಕತೆಗೆ ಸಂಬಂಧಿಸಿದ ಶಬ್ದ) ಚಳವಳಿಗೆ ಪ್ರೇರಣೆ ನೀಡಿದವರು ಯಾರು? ಇದು ನಿಮ್ಮ ಕೆಲಸವಲ್ಲ. ಆ ಹೇಡಿಗಳನ್ನು ಹೊರಗೆಳೆದು ಹತ್ಯೆ ಮಾಡಿ’ ಎಂಬ ಸಂದೇಶ ಪ್ರಕಟಿಸಿದ್ದರು.