‘ಮುಗ್ಧ ಜೀವಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಇಂತಹ ಸಂವೇದನಾರಹಿತ ಕೃತ್ಯಗಳು ಸಮಾಜದ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಡೆದ ದಾಳಿ. ಇದು ಸಾರ್ವತ್ರಿಕ ಖಂಡನೆಗೆ ಅರ್ಹವಾದುದು. ಬದ್ಧತೆಯಿಂದ ಮತ್ತು ಸಹಭಾಗಿತ್ವದ ಕ್ರಮದಿಂದ ತಪ್ಪಿತಸ್ಥರನ್ನು ಶಿಕ್ಷಿಸಬೇಕು’ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್.ಎನ್. ವೊಹ್ರಾ ಅವರಿಗೆ ಕಳುಹಿಸಿರುವ ಸಂದೇಶದಲ್ಲಿ ಮುಖರ್ಜಿ ಹೇಳಿದ್ದಾರೆ.