ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೊರೆಸ್ವಾಮಿ, ‘ನನಗಿಂತಲೂ 22 ವರ್ಷ ಕಿರಿಯವರಾದ ಎಂ.ಪಿ.ಪ್ರಕಾಶ್ ಅವರಿಗೆ ಇನ್ನೂ ಸಾಕಷ್ಟು ಸಾಧಿಸುವ, ಸಮಾಜ ಮತ್ತು ಸಂಸ್ಕೃತಿ ಕಟ್ಟುವ ಸಾಮರ್ಥ್ಯ ಇತ್ತು. ಅವರ ಒಡನಾಡಿಯಾಗಿದ್ದ ನನಗೆ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಲು ಒಂದು ಕಡೆ ಸಂತೋಷವಾದರೆ, ಅವರ ಅಗಲಿಕೆ ದುಃಖ ಉಂಟು ಮಾಡುತ್ತಿದೆ’ ಎಂದರು.