ಬೀದರ್: ಅಮರನಾಥ ಯಾತ್ರಿಗಳ ಮೇಲೆ ಪಾಕಿಸ್ತಾನ ಪ್ರಚೋದಿತ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿರುವುದನ್ನು ಖಂಡಿಸಿ ಕನ್ನಡಾಂಬೆ ಗೆಳೆಯರ ಬಳಗವು ನಗರದಲ್ಲಿ ಮಂಗಳವಾರ ಪಾಕಿಸ್ತಾನದ ಧ್ವಜದ ಪ್ರತಿಕೃತಿ ಸುಟ್ಟು ಪ್ರತಿಭಟನೆ ನಡೆಸಿತು.
ಮೌನೇಶ್ವರ ಮಂದಿರ ಬಳಿಯ ಕಚೇರಿಯಿಂದ ಘೋಷಣೆ ಕೂಗುತ್ತ ಗುಂಪಾ ರಿಂಗ್ ರಸ್ತೆ ಬಳಿ ಬಂದ ಬಳಗದ ಸದಸ್ಯರು ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.