‘71 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯು ಸಂಪೂರ್ಣ ಹಾಳಾಗಿದೆ. ಕಸವನ್ನು ತಂದು ಕೆರೆಯಂಗಳದಲ್ಲಿ ಸುರಿಯಲಾಗುತ್ತಿದೆ. ಇದರಲ್ಲಿ ಹೂಳು ತುಂಬಿದ್ದು, ಜಾಲಿಮರಗಳು ಬೆಳೆದಿವೆ. ಅವುಗಳನ್ನು ತೆರವುಗೊಳಿಸಬೇಕು. ಹೂಳು ತೆಗೆಯಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
‘ಎರಡು ವರ್ಷಗಳಿಂದ ಕೆರೆಯ ಸಮೀಪ ಹಂದಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಅದರ ಮಲ–ಮೂತ್ರವನ್ನು ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಕೆರೆಯ ನೀರು ಕಲುಷಿತಗೊಂಡಿದೆ.