ಕೋಮು ಪ್ರಚೋದನೆ ನೀಡುವಂಥ ವಿಡಿಯೊವನ್ನು ಕೆಲವು ವಾರಗಳ ಹಿಂದೆಯೇ ತರುಣ್ ಸೇನ್ಗುಪ್ತಾ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರು. ‘ನಾರ್ತ್ 24 ಪರಗಣ’ ಜಿಲ್ಲೆಯ ಬಷಿರತ್ನ ಬದುರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಗಲಭೆ ವೇಳೆ ಅನೇಕರು ಆ ವಿಡಿಯೊವನ್ನು ಶೇರ್ ಮಾಡಿದ್ದರು. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.