ವೇದಿಕೆಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ನಿರತ ಸ್ಥಳದ ಪಕ್ಕದಲ್ಲಿ ಜೆಸಿಬಿ ಯಂತ್ರದಿಂದ ಗುಂಡಿಗಳನ್ನು ತೆಗೆದ ಪ್ರತಿಭಟನಾಕರಾರು, ಗುಂಡಿಗಳಲ್ಲಿ ಶವದ ರೀತಿ ಮಲಗಿ ‘ನೀರು ಕೊಡಿ ಇಲ್ಲವೆ ಮಣ್ಣು ಹಾಕಿ’ ಎಂದು ಘೋಷಣೆ ಕೂಗಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಎಸ್.ಹರ್ಷ, ಪ್ರತಿಭಟನೆ ನೇತೃತ್ವ ವಹಿಸಿರುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶಗೌಡ ಜತೆ ಮಾತುಕತೆ ನಡೆಸಿದರು.