‘ಕುರಿಗಳಿಗೆ ಔಷಧೋಪಚಾರ, ಚಿಕಿತ್ಸೆ ಹಾಗೂ ಕುರಿಗಳ ಸಾವಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಇದರ ಅನುದಾನ ದುರ್ಬಳಕೆ ಆಗುತ್ತಿದೆ. ಈ ವರ್ಷ ಕುರಿಗಳ ಚಿಕಿತ್ಸೆಗಾಗಿ ₹8.16 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕುರಿಗಳ ರೋಗ ತಪಾಸಣೆಗಾಗಿ ಸ್ಥಳಕ್ಕೆ ತೆರಳಲು ವಾಹನ ಸೌಲಭ್ಯ ಕೂಡಾ ಇದೆ. ಆಕಸ್ಮಿಕವಾಗಿ ಸಾಯುವ ಒಂದು ಕುರಿಗೆ ₹5 ಸಾವಿರ ಪರಿಹಾರ ಕೊಡಬೇಕು. ಅಧಿಕಾರಿಗಳಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಕುರಿಗಾಹಿಗಳಿಗೆ ಇದರ ಸೌಲಭ್ಯವನ್ನು ಒದಗಿಸಿಲ್ಲ’ ಎಂದರು.