ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ನಡೆಸಲಾದ ಆಂತರಿಕ ತನಿಖೆಯಲ್ಲಿ ಸೇನೆಯು ಶಸ್ತ್ರಾಸ್ತ್ರಗಳ ಕೊರತೆಯ ಸಮಸ್ಯೆ ಎದುರಿಸುತ್ತಿರುವುದು ಬೆಳಕಿಗೆ ಬಂದಿತ್ತು. ದಾಳಿಯಲ್ಲಿ 19 ಯೋಧರು ಮೃತಪಟ್ಟಿದ್ದರು. ಫಿರಂಗಿದಳದ ಸಾಮಗ್ರಿ, ಟ್ಯಾಂಕ್ ಶೆಲ್ಗಳು ಮತ್ತು ಶಸ್ತ್ರಾಸ್ತ್ರಗಳ ಭಾರಿ ಕೊರತೆ ಇರುವುದು ತಿಳಿದುಬಂದಿತ್ತು.