ಸೆಂಚುರಿಗೌಡರಿಗೆ ಕಿವಿ ಕೇಳಿಸುತ್ತಿರಲಿಲ್ಲ. ಆದರೂ, ನಿರ್ದೇಶಕರು ಹೇಳಿಕೊಟ್ಟಂತೆ ನಟಿಸುತ್ತಿದ್ದರು. ಅವರನ್ನು ನೋಡಿದಾಗ ನಟ ಬಾಲಕೃಷ್ಣ ನೆನಪಿಗೆ ಬರುತ್ತಿದ್ದರು. ಈಗ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಿದೆ ಎಂದ ಅವರ ಮಾತಿನಲ್ಲಿ ವೃತ್ತಿ ಬದ್ಧತೆ ಕಾಣುತ್ತಿತ್ತು.