ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸತ್ಯಾತ್ಮ ತೀರ್ಥ ಶ್ರೀಪಾದಂಗಳು, ಪ್ರಸಕ್ತ ದಿನಗಳಲ್ಲಿ ಒತ್ತಡದ ಬದುಕು, ಚಿಂತೆಗಳಿಂದಾಗಿ ಮಾನಸಿಕ ನೆಮ್ಮದಿ ಇಲ್ಲದಾಗಿದೆ. ಮಾನ ಸಿಕ ನೆಮ್ಮದಿ ಪಡೆಯಲು ಧ್ಯಾನ ಮಾಡ ಬೇಕು. ಮಾನವ ಜನ್ಮ ಸಾರ್ಥಕವಾಗಲು ಭಗವಂತನ ಸ್ಮರಣೆ ಮಾಡಬೇಕು ಎಂದು ಹೇಳಿದರು. ಭಕ್ತರು ಟೀಕಾರಾಯರು ಗ್ರಂಥ ರಚಿಸಿದ ಗುಹೆ, ಮೂಲರಾಮದೇವರು, ಸತ್ಯಾತ್ಮ ತೀರ್ಥರ ದರ್ಶನವನ್ನು ಪಡೆದರು. ಅಲ್ಲಿ ಸುಧಾ ಪಾಠ ನಡೆಯಿತು.