‘ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿದೆ. ಕೈದಿಗಳಿಗೆ ಅವರ ಕಡೆಯವರು ಕಡಲೆಬೀಜವನ್ನು ತಂದುಕೊಟ್ಟಿದ್ದರೆ ಅನುಮಾನ ಇರುತ್ತಿರಲಿಲ್ಲ. ತಿನ್ನಲು ಎಂದುಕೊಳ್ಳಬಹುದಿತ್ತು. ಆದರೆ, ಕಡಲೆಕಾಯಿ ಸಿಪ್ಪೆ ಸಮೇತ ಇದ್ದದ್ದು ಅನುಮಾನಕ್ಕೆ ಕಾರಣವಾಗಿ ಪರಿಶೀಲಿಸಲಾಯಿತು. ಕಡಲೆಕಾಯಿಯಲ್ಲಿ ಸಿಪ್ಪೆ ಬಿಡಿಸಿ ಬೀಜವನ್ನು ತೆಗೆದು ಆ ಜಾಗದಲ್ಲಿ ಗಾಂಜಾ ತುಂಬಿ ಮತ್ತೆ ಸಿಪ್ಪೆಯನ್ನು ಅಂಟಿಸಿ ಪೂರೈಸಲಾಗಿತ್ತು. ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ. ಇದರಿಂದ ಅಕ್ರಮಕ್ಕೆ ಕಡಿವಾಣ ಬಿದ್ದಿದೆ’ ಎಂದು ಅಧೀಕ್ಷಕ ಟಿ.ಪಿ. ಶೇಷ 'ಪ್ರಜಾವಾಣಿ'ಗೆ ತಿಳಿಸಿದರು.