ತವರಿನಿಂದ ವಾಪಸಾದ ಉತ್ತರ ಕರ್ನಾಟಕದ ಕಾರ್ಮಿಕರ ಈ ಗುಂಪು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೊ ನಿಲ್ದಾಣದಲ್ಲಿ ಇಳಿದು ಬರುತ್ತಿತ್ತು.ಮುಂದಿನ ಸಲ ಊರಿಗೆ ಹೋಗುವವರೆಗೂ ಬೇಕಾಗುವಷ್ಟು ರೊಟ್ಟಿ, ಕಾಯಿಪಲ್ಲೆ, ಹಿಟ್ಟು, ಬಟ್ಟೆ ಎಲ್ಲದರ ಮೂಟೆ ಒಬ್ಬೊಬ್ಬರ ತಲೆ ಮೇಲೆ.
ವಿಧಾನಸೌಧದ ಸಮೀಪದಲ್ಲೇ ಇರುವ ಪ್ರಧಾನ ಅಂಚೆ ಕಚೇರಿಗೆ ಕೂಗಳತೆ ದೂರದಲ್ಲಿ ಇವರ ಜೋಪಡಿ. ಊರಿಂದ ಬಂದರೂ ಕೂಲಿಗೆ ಹೋಗಲೇಬೇಕಲ್ಲಾ.. ಎಲ್ಲರಿಗೂ ಅವರಸ. ಅದರ ನಡುವೆ ಮಕ್ಕಳಿಗೆ ಬ್ರೆಡ್, ಬಿಸ್ಕತ್ತಿನ ಸಮಾರಾಧನೆ ಮರೆಯಲಾದೀತೇ?