ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಪುನೀತ್ ಕೆಂಚಪ್ಪ ಗಿರಿಯಪ್ಪ ಅವರನ್ನು ಕಮಲ್ ಅವರ ಸ್ಥಾನಕ್ಕೆ ನೇಮಕ ಮಾಡಲಾಗಿದೆ. 23 ವರ್ಷದೊಳಗಿನವರ ಎಎಫ್ಸಿ ಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಿಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡವನ್ನು ಕೆಂಚಪ್ಪ ಶೀಘ್ರ ಸೇರಲಿದ್ದಾರೆ.