ಕೇಂದ್ರ ಅಬಕಾರಿ ಪ್ರಧಾನ ಹೆಚ್ಚುವರಿ ಮಹಾನಿರ್ದೇಶಕ ಡಿ.ಪಿ. ನಾಗೇಂದ್ರ ಕುಮಾರ್, ‘ಪಾರದರ್ಶಕ ಮತ್ತು ಭ್ರಷ್ಟಾಚಾರರಹಿತ ಆಡಳಿತ ನಿರ್ಮಿಸಲು ಜಿಎಸ್ಟಿ ನೆರವಾಗಿದೆ. ಸಮಗ್ರ ಜಿಎಸ್ಟಿಯಿಂದ (ಐಜಿಎಸ್ಟಿ) 10 ದಿನಗಳಲ್ಲಿ ದೇಶಕ್ಕೆ ₹4 ಸಾವಿರ ಕೋಟಿ ವರಮಾನ ಬಂದಿದೆ. ಇದು ತೆರಿಗೆ ವ್ಯವಸ್ಥೆ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಉದಾಹರಣೆ’ ಎಂದು ಹೇಳಿದರು.