ನ್ಯಾಯಾಲಯದ ಆದೇಶ ಇದ್ದರೂ ತಮಿಳುನಾಡಿಗೆ ನೀರು ಕೊಡಲು ಆಗಿಲ್ಲ. ಮಳೆಯೇ ಇಲ್ಲದಿದ್ದರೆ ನೀರು ಹರಿಸುವುದು ಹೇಗೆ ಎಂದು ಪ್ರಶ್ನಿಸಿದರು.
ನೀರು ಹರಿಸುವಂತೆ ಕೋರಿ ತಮಿಳುನಾಡಿನವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅವರಿಗೂ ನಮಗೂ ವ್ಯಾಜ್ಯ ನಡೆಯುತ್ತಿದೆ, ನಮಗೆ ನೀರೇ ಕೊಡಲ್ಲ ಎಂದು ತಮಿಳುನಾಡು ವಾದ ಮಾಡಬಾರದು ಎಂಬ ಉದ್ದೇಶದಿಂದ ಸ್ವಲ್ಪ ನೀರು ಬಿಟ್ಟಿದ್ದೇವೆ ಎಂದರು.