‘ಕ್ಯಾನ್ಸರ್ ಇರುವ ರೋಗಿಯ ಸಂಬಂಧಿಗಳು ತಪಾಸಣೆ ಮಾಡಿಸಿಕೊಳ್ಳಬೇಕು. ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷ ಡಾ. ವಿಜಯ್ ಚಂದ್ರು, ‘ದೇಶದಲ್ಲಿ ಅನುವಂಶೀಯ ರೂಪಾಂತರಗಳನ್ನು ನಿರೂಪಿಸುವ ಕುರಿತು ಸ್ತನ, ಅಂಡಾಶಯ ಕ್ಯಾನ್ಸರ್ ರೋಗಿಗಳ ಮೇಲೆ ನಡೆದಿರುವ ಅಧ್ಯಯನಗಳು ಕಡಿಮೆ. ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಕ್ಯಾನ್ಸರ್ ವಂಶವಾಹಿಗಳು, ಬಿಆರ್ಸಿಎ 1, 2ಗಳ ಅಧ್ಯಯನವನ್ನು ದೇಶದ ಬೇರೆ ಬೇರೆ ಪ್ರದೇಶಗಳ ರೋಗಿಗಳ ಮೇಲೆ ನಡೆಸುವ ಅಗತ್ಯವಿದೆ’ ಎಂದು ಹೇಳಿದರು.
ಈ ಅಧ್ಯಯನ ವರದಿ ನೇಚರ್ ಗ್ರೂಪ್ನ ‘ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.