ತಾಂಡಾದ ತೋಟದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಬುಧವಾರ ಸಂಜೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಿಷಯ ತಿಳಿದ ಮಹಿಳೆಯ ಸಂಬಂಧಿಕರು ಗುರುವಾರ ಸಂಜೆ ತಾಂಡಾದ ಸೇವಾಲಾಲ ವೃತ್ತದಲ್ಲಿ ಶಂಕರ ಅವರನ್ನು ತಡೆದು ಥಳಿಸಿದ್ದಾರೆ. ಹಲ್ಲೆಗೊಳಗಾದ ಶಂಕರ, ಮಹಿಳೆಯ ಸಂಬಂಧಿಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಷಯ ಗೊತ್ತಾದ ನಂತರ ಮಹಿಳೆಯ ಸಂಬಂಧಿಕರು ಮರು ದೂರು ನೀಡಿದ್ದಾರೆ.