ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಘಟಕದ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ‘ಸಮಾಜಸೇವೆ ಮಾಡಬಯಸುವ ಜನರಿಗೆ ಕಾಮರಾಜ್ ಅವರು ಉತ್ತಮ ನಿದರ್ಶನ. ಅವರ ಚರಿತ್ರೆಯನ್ನು ಯುವಕರು ಅರಿಯಬೇಕು. ವಿದ್ಯಾಭ್ಯಾಸ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ತಮಿಳುನಾಡು ಬೆಳವಣಿಗೆ ಹೊಂದಲು ಅವರೇ ಕಾರಣ. ಎಲ್ಲರಿಗೂ ಶಿಕ್ಷಣ ದೊರೆಯಲು 13 ಸಾವಿರ ಶಾಲೆಗಳನ್ನು ಪ್ರಾರಂಭಿಸಿದರು ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದೂ ಅವರೇ’ ಎಂದರು.