ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದ್ದರಿಂದ ನಾನು ಗೋವುಗಳನ್ನು ದತ್ತು ಪಡೆದು, ಮುಸ್ಲಿಮರು ಕೂಡಾ ಗೋವುಗಳನ್ನು ಪ್ರೀತಿಸುತ್ತಿದ್ದಾರೆ ಎಂಬ ಸಂದೇಶವನ್ನು ನೀಡುತ್ತಿದ್ದೇನೆ. ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ತಡೆಯಲು ನಾನು ಈ ಕಾರ್ಯ ಕೈಗೊಂಡಿದ್ದೇನೆ, ನಾನು ಇದರಲ್ಲಿ ತೃಪ್ತನಾಗಿದ್ದೇನೆ. ಗೋರಕ್ಷಕರು ಹಸುಗಳನ್ನು 'ತಾಯಿ' ಎಂದು ಗೌರವಿಸುವುದಾದರೆ ಬೀದಿಯಲ್ಲಿ ಅಲೆಯುವ ಬೀಡಾಡಿ ದನಗಳನ್ನು ದತ್ತು ಪಡೆಯಲಿ ಎಂದು ಖಾನ್ ಹೇಳಿದ್ದಾರೆ.