ಇದರಿಂದ ಬೇಸರಗೊಂಡಿರುವ ನಿರ್ದೇಶಕ, ರಾಹುಲ್ ಗಾಂಧಿಯವರ ಕಚೇರಿ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ, ‘ಪುಣೆ ಘಟನೆ ಬಳಿಕ ಇದೀಗ ನಾಗ್ಪುರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನೂ ರದ್ದು ಪಡಿಸಲಾಗಿದೆ. ನೀವು ಈ ಗೂಂಡಾಗಿರಿಯನ್ನು ಒಪ್ಪುತ್ತೀರಾ? ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ?’ ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.