ಹೋಟೆಲ್ ಗುತ್ತಿಗೆ ನೀಡುವುದಕ್ಕಾಗಿ ಜಮೀನು ಪಡೆದ ಆರೋಪದ ಪ್ರಕರಣದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ನಿವಾಸದ ಮೇಲೆ ಸಿಬಿಐ ದಾಳಿ ನಡೆದ ನಂತರ ತೇಜಸ್ವಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ತೇಜಸ್ವಿ ಸೇರಿ ಲಾಲು ಕುಟುಂಬದ ಹಲವರ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ.
ತೇಜಸ್ವಿ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷ ಬಿಜೆಪಿ ಒತ್ತಾಯಿಸಿತ್ತು. ಜೆಡಿಯು ಕೂಡ ಇದೇ ನಿಲುವು ತಳೆದಿದೆ ಎಂದು ವರದಿಯಾಗಿತ್ತು.