‘ಈಗಲೂ ನಾವು ಮನಸ್ಸು ಮಾಡಿದರೆ ನಗರವನ್ನು ಉಳಿಸಬಹುದು. ಆದರೆ, ಅದಕ್ಕೆ ಸಂಯೋಜಿತ ಪ್ರಯತ್ನ ಅಗತ್ಯ. ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಕೆರೆ ಸಂರಕ್ಷಣಾ ಪ್ರಾಧಿಕಾರಗಳು ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಡಬ್ಲ್ಯುಆರ್ಐನ ಸುಸ್ಥಿರ ನಗರ ವಿಭಾಗದ ನಿರ್ದೇಶಕಿ ಜಯಾ ಡಿಂಡೊ ತಿಳಿಸಿದರು.