ರಾಜ್ಯಸಭೆಯಲ್ಲಿ ನಾನು ಸಮಾಜದ ದುರ್ಬಲ ವಿಭಾಗದ ಜನರ ಬಗ್ಗೆ ಮಾತನಾಡಲು ಹೋದರೆ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ, ಯಾಕೆ? ಇದು ನಾಚಿಕೆಗೇಡಿನ ಸಂಗತಿ. ದುರ್ಬಲ ವಿಭಾಗದ ಜನರ ಬಗ್ಗೆ ನಾನು ಸದನದಲ್ಲಿ ಮಾತನಾಡಿಲ್ಲ ಎಂದರೆ ಸದನದಲ್ಲಿರಲು ನನಗೆ ಹಕ್ಕು ಇಲ್ಲ. ಆದ್ದರಿಂದಲೇ ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ, ನನ್ನನ್ನು ಮಾತನಾಡಲೂ ಬಿಡುವುದಿಲ್ಲ ಎಂದು ಸದನದಿಂದ ಹೊರ ಬಂದು ಮಾತನಾಡಿದ ಮಾಯಾವತಿ ಹೇಳಿದ್ದಾರೆ.