ದೊಡ್ಡಬಳ್ಳಾಪುರ, ಹೊಸಕೋಟೆ, ಆನೇಕಲ್, ನೆಲಮಂಗಲ ಮತ್ತು ರಾಮನಗರದ ಪ್ರದೇಶಗಳಲ್ಲಿ ಬೆಳೆಯುವ ಗೋರಿಕಾಯಿ, ಹೂಕೋಸು, ಆಲೂಗಡ್ಡೆಯ ಬೆಳೆಗಳ ಇಳುವರಿ ಉತ್ತಮವಾಗಿ ಬರುತ್ತಿದೆ. ಈ ತರಕಾರಿಗಳು ಮಾರುಕಟ್ಟೆಗೆ ಅಧಿಕವಾಗಿ ಸರಬರಾಜಾಗುತ್ತಿವೆ. ಹಾಗಾಗಿ ಬೆಲೆಗಳು ಕಡಿಮೆ ಆಗಿವೆ.
ಬದನೆಕಾಯಿ, ಕ್ಯಾಪ್ಸಿಕಮ್, ನವಿಲುಕೋಸು, ಈರುಳ್ಳಿಯ ಬೆಲೆಗಳಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ.